ಕೃಷ್ಣಯ್ಯ ಹಾಗೂ ಮೋಹನ್ ನಿರ್ಮಾಣದ ಕರಿಚಿರತೆ ಚಿತ್ರಕ್ಕೆ ಕಳೆದ ವಾರ ಮಿನರ್ವ ಮಿಲ್ನಲ್ಲಿ ಹಾಡೊಂದರ ಚಿತ್ರೀಕರಣ ನಡೆಯಿತು. ಗಜ, ರಾಮ್ ಚಿತ್ರಗಳ ನಿರ್ದೇಶಕ ಮಾದೇಶ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿಜಯ್ ಕರಿಚಿರತೆಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೈಸೂರು ಸುತ್ತಮುತ್ತ ೨೫ ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದೆ. ಮೊನ್ನೆ ಮಿಲ್ನ ಆವರಣದಲ್ಲಿ ೮ ಲಕ್ಷ ರೂ. ವೆಚ್ಚದಲ್ಲಿ ಹಾಕಲಾಗಿದ್ದ ಅದ್ಧೂರಿ ಸೆಟ್ನಲ್ಲಿ ಮೈ ನೇಮ್ ಈಸ್ ಕರಿ ಚಿರತೆ ಎಂಬ ಹಾಡಿಗೆ ವಿಜಯ್, ಯಜ್ಞ ಶೆಟ್ಟಿ ಜೊತೆ ೨೫ ಜನ ನೃತ್ಯಕಲಾವಿದರು ಹೆಜ್ಜೆ ಹಾಕುತ್ತಿದ್ದರು. ಹರ್ಷ ನೃತ್ಯ ನಿರ್ದೇಶನದಲ್ಲಿರುವ ಈ ಹಾಡು ನಾಯಕ, ನಾಯಕಿಗೆ ಪ್ರೇಮ ನಿವೇದನೆ ಮಾಡುವ ಕಾನ್ಸೆಪ್ಟ್ ಹೊಂದಿದೆ.
ಜೀವನದಲ್ಲಿ ನಮಗಿರುವ ಆಸೆ ಒಂದಾಗಿದ್ದರೆ, ನಡೆವುದೇ ಬೇರೆಯಾಗಿರುತ್ತದೆ. ಆ ರೀತಿಯ ಘಟನೆ ನಾಯಕನ ಜೀವನದಲ್ಲಿ ಆದಾಗ ಆತ ಭ್ರಮನಿರಸನಗೊಂಡು ಹುಚ್ಚನಾಗುತ್ತಾನೆ. ನಾಯಕ ವಿಜಯ್ ಈ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ ಎನ್ನುತ್ತಾರೆ ನಿರ್ದೇಶಕ ಮಾದೇಶ್. ಸಾಧು ಕೋಕಿಲಾರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಶರ್ಮಿಳಾ ಮಾಂಡ್ರೆ ಹಾಗೂ ಯಜ್ಞ ಶೆಟ್ಟಿ ಇಬ್ಬರು ನಾಯಕಿಯರಿದ್ದು, ಜೈಜಗದೀಶ್, ರಂಗಾಯಣ ರಘು, ಸಂಗೀತ, ಸುಧಾ ಬೆಳವಾಡಿ ಪ್ರಮುಖ ಪಾತ್ರದಲ್ಲಿದ್ದಾರೆ.